9/29/2020

ಸಂಜು ಪ್ರತಿಭೆಯನ್ನು ಧೋನಿಗೆ ಹೋಲಿಸಿದ ಶಶಿ ತರೂರ್: ಗಂಭೀರ್ ಬಳಿಕ ಶ್ರೀಶಾಂತ್ ಆಕ್ಷೇಪ

 ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಸತತ ಎರಡು ಇನ್ನಿಂಗ್ಸ್‌ಗಳಲ್ಲಿ ಶ್ರೇಷ್ಠ ಪ್ರದರ್ಶನವನ್ನು ನೀಡಿ ಮಿಂಚಿರುವ ಸಂಜು ಸ್ಯಾಮ್ಸನ್ ಪ್ರತಿಭೆಗೆ ಪ್ರಶಂಸೆಯ ಸುರಿಮಳೆಯೇ ಬಂದಿದೆ. ಎಲ್ಲಾ ಕ್ರಿಕೆಟ್ ಅಭಿಮಾನಿಗಳಂತೆಯೇ ಸಂಜು ಸ್ಯಾಮ್ಸನ್ ಆಟವನ್ನು ಕೇರಳದ ಕಾಂಗ್ರೆಸ್ ಎಂಪಿ ಶಶಿ ತರೂರ್ ಕೂಡ ಕೊಂಡಾಡಿದ್ದರು. ಭವಿಷ್ಯದ ಧೋನಿ ಸಂಜು ಸ್ಯಾಮ್ಸನ್ ಎಂದು ಬಣ್ಣಿಸಿದ್ದರು.


ಆದರೆ ಸಂಜು ಸ್ಯಾಮ್ಸನ್ ಬ್ಯಾಟಿಂಗನ್ನು ಧೋನಿಗೆ ಹೋಲಿಸಿದಕ್ಕೆ ಮಾಜಿ ಕ್ರಿಕೆಟಿಗ ಹಾಲಿ ಸಂಸದ ಗೌತಮ್ ಗಂಭೀರ್ ಆಕ್ಷೇಪಿಸಿ ಟ್ವೀಟ್ ಮಾಡಿದ್ದರು. ಈಗ ಮತ್ತೋರ್ವ ಕ್ರಿಕೆಟಿಗ ಶ್ರೀಶಾಂತ್ ಕೂಡ ಶಶಿ ತರೂರ್ ಬಣ್ಣನೆಗೆ ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ. ಆತ ಮುಂದಿನ ಧೋನಿ ಅಲ್ಲ. ಆತ ಏಕೈಕ ಸಂಜು ಸ್ಯಾಮ್ಸನ್ ಎಂದು ಶ್ರೀಶಾಂತ್ ಟ್ವೀಟ್ ಮಾಡಿದ್ದಾರೆ

ಶಶಿ ತರೂರ್ ಟ್ವೀಟ್‌ಗೆ ಪ್ರತಿಕ್ರಿಯಿಸುತ್ತಾ ಶ್ರೀಶಾಂತ್ "ಆತ ಭವಿಷ್ಯದ ಧೋನಿ ಅಲ್ಲ. ಈತ ಏಕೈಕ ಸಂಜು ಸ್ಯಾಮ್ಸನ್. ಈತ 2015ರಿಂದ ಎಲ್ಲಾ ಮಾದರಿ ಕ್ರಿಕೆಟ್‌ನಲ್ಲೂ ನಿರಂತರವಾಗಿ ಆಡುತ್ತಿರಬೇಕಾಗಿತ್ತು. ಯಾರೊಂದಿಗೂ ಆತನನ್ನು ಹೋಲಿಕೆ ಮಾಡಬೇಡಿ. ಸರಿಯಾದ ಅವಕಾಶವನ್ನು ಆತನಿಗೆ ನೀಡಿದ್ದರೆ ಭಾರತ ತಂಡಕ್ಕೂ ಇದೇ ರೀತಿ ಆಡುತ್ತಿದ್ದರು ಹಾಗೂ ವಿಶ್ವಕಪ್ ಗೆಲ್ಲುತ್ತಿದ್ದರು" ಎಂದು ಶ್ರೀಶಾಂತ್ ಟ್ವೀಟ್ ಮಾಡಿದ್ದಾರೆ.


ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಸಂಜು ಸ್ಯಾಮ್ಸನ್ ಆಟವನ್ನು ಹೊಗಳುತ್ತಾ ಶಶಿ ತರೂರ್ ''ರಾಜಸ್ಥಾನ್ ರಾಯಲ್ಸ್‌ ಸಂಪೂರ್ಣವಾಗಿ ನಂಬಲಾಗದ ಗೆಲುವು ಕಂಡಿದೆ. ಸಂಜು ಸ್ಯಾಮ್ಸನ್ ಅವರನ್ನು ದಶಕದಿಂದ ತಿಳಿದಿದ್ದೇನೆ. ಆತ 14 ವರ್ಷದವನಿದ್ದಾಗ ಅವನಿಗೆ ನೀನು ಮುಂದಿನ ಧೋನಿ ಆಗಲಿದ್ದೀಯ ಎಂದು ಹೇಳಿದ್ದೆ. ಆ ದಿನ ಇಲ್ಲಿದೆ. ಅವನ ಈ ಎರಡು ಅದ್ಭುತ ಐಪಿಎಲ್ ಇನ್ನಿಂಗ್ಸ್ ವಿಶ್ವ ದರ್ಜೆಯ ಆಟಗಾರನೊಬ್ಬ ಬಂದಿದ್ದಾನೆಂದು ನಿಮಗೆ ತಿಳಿಸುತ್ತಿದೆ'' ಎಂದು ಶಶಿ ತರೂರ್ ಟ್ವೀಟ್ ಮಾಡಿದ್ದರು

.ಇದಕ್ಕೆ ಗೌತಮ್ ಗಂಭೀರ್ "ಸಂಜು ಸ್ಯಾಮ್ಸನ್ ಅವರನ್ನು ಯಾರೊಂದಿಗೂ ಹೋಲಿಕೆ ಮಾಡುವ ಅಗತ್ಯವಿಲ್ಲ. ಅವರು ಭಾರತೀಯ ಕ್ರಿಕೆಟ್‌ನ ಸಂಜು ಸ್ಯಾಮ್ಸನ್ ಆಗಿಯೇ ಇರುತ್ತಾರೆ ಎಂದು ಟ್ವೀಟ್ ಮೂಲಕ ತರೂರ್ ಬಣ್ಣನೆಗೆ ತಮ್ಮ ಆಕ್ಷೇಪವನ್ನು ವ್ಯಕ್ತಪಡಿಸಿದ್ದರು.

ಐಪಿಎಲ್ 2020: ಸಿಕ್ಸ್‌ನಲ್ಲಿ 'ಹಿಟ್‌ಮ್ಯಾನ್' ರೋಹಿತ್ ಶರ್ಮಾ ದಾಖಲೆ

 ದುಬೈ: ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸಿಕ್ಸ್‌ಗಾಗಿ ದಾಖಲೆ ನಿರ್ಮಿಸಿದ್ದಾರೆ. ಮುಂಬೈ ಪರ ಅತ್ಯಧಿಕ ಸಿಕ್ಸರ್ ಬಾರಿಸಿದ ಎರಡನೇ ಬ್ಯಾಟ್ಸ್‌ಮನ್ ಆಗಿ ಶರ್ಮಾ ಗುರುತಿಸಿಕೊಂಡಿದ್ದಾರೆ. ಎಂಐ ಪರ ರೋಹಿತ್ 150 ಸಿಕ್ಸರ್‌ಗಳನ್ನು ಬಾರಿಸಿದಂತಾಗಿದೆ.

ಮುಂಬೈ ಇಂಡಿಯನ್ಸ್ ಪರ ಅತೀ ಹೆಚ್ಚು ಸಿಕ್ಸರ್ ಬಾರಿಸಿದ ದಾಖಲೆ ವೆಸ್ಟ್ ಇಂಡೀಸ್ ಸ್ಫೋಟಕ ಬ್ಯಾಟ್ಸ್‌ಮನ್ ಕೀರನ್ ಪೊಲಾರ್ಡ್ ಹೆಸರಿನಲ್ಲಿದೆ. ಐಪಿಎಲ್‌ನಲ್ಲಿ ಪೊಲಾರ್ಡ್ ಒಟ್ಟಾರೆ 151 ಪಂದ್ಯಗಳಲ್ಲಿ 182 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.

ಸೋಮವಾರ (ಸೆಪ್ಟೆಂಬರ್ 8) ನಡೆದ ಐಪಿಎಲ್ 10ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ರೋಹಿತ್ 8 ಎಸೆತಗಳಿಗೆ 1 ಸಿಕ್ಸ್‌ ಕೂಡ ಸೇರಿ 8 ರನ್ ಬಾರಿಸಿ ಔಟಾದರು. ಇದರೊಂದಿಗೆ ರೋಹಿತ್ ಹೆಸರಿನಲ್ಲಿ ಮೈಲಿಗಲ್ಲು ಸ್ಥಾಪಿಸಲ್ಪಟ್ಟಿದೆ.

ಐಪಿಎಲ್‌ನಲ್ಲಿ 200+ ಸಿಕ್ಸರ್‌ಗಳನ್ನು ಬಾರಿಸಿದ 4ನೇ ಬ್ಯಾಟ್ಸ್‌ಮನ್‌ ಆಗಿಯೂ ರೋಹಿತ್ ಗುರುತಿಸಿಕೊಂಡಿದ್ದಾರೆ. ರೋಹಿತ್ ಬಿಟ್ಟರೆ ಕ್ರಿಸ್ ಗೇಲ್, ಎಬಿ ಡಿ ವಿಲಿಯರ್ಸ್ ಮತ್ತು ಎಂಎಸ್ ಧೋನಿ ಈ ಪಟ್ಟಿಯಲ್ಲಿದ್ದಾರೆ. ಅಂದ್ಹಾಗೆ ಎಂಐ vs ಆರ್‌ಸಿಬಿ ಪಂದ್ಯ 201 ರನ್‌ಗಳಿಂದ ಸಮಬಲಗೊಂಡಿತ್ತು. ಸೂಪರ್ ಓವರ್‌ನಲ್ಲಿ ಬೆಂಗಳೂರು ಗೆದ್ದಿತು.

ಸೂಪರ್ ಓವರ್‌ನಲ್ಲಿ ಡಿವಿಲಿಯರ್ಸ್, ಕೊಹ್ಲಿ ಮೋಡಿ- ಆರ್‌ಸಿಬಿಗೆ ಜಯ

 ದುಬೈ: ಆರಂಭಿಕ ಹಂತದಲ್ಲಿ ಎಡವಿದ್ದ ಮುಂಬೈ ತಂಡವನ್ನು ಇಶಾನ್ ಕಿಶನ್ ಹಾಗೂ ಪೊಲಾರ್ಡ್ ಒಂದು ಹಂತಕ್ಕೆ ತಂದಿದ್ದರು. ಆದರೂ ಪಂದ್ಯ ಟೈ ಆಗುವ ಮೂಲಕ ಸೂಪರ್ ಓವರ್ ತಲುಪಿತು. ಸೂಪರ್ ಓವರ್ ನಲ್ಲಿ ಆರ್ ಸಿಬಿ ಪಂದ್ಯವನ್ನು ತನ್ನದಾಗಿಸಿಕೊಳ್ಳುವ ಮೂಲಕ ಜಯಲಕ್ಷ್ಮಿಯನ್ನು ತನ್ನದಾಗಿಸಿಕೊಳ್ಳಿತು.



ಆರ್ ಸಿಬಿ ನೀಡಿದ್ದ 202ರನ್‍ಗಳ ಟಾರ್ಗೆಟ್ ಬೆನ್ನಟ್ಟಿದ ಮುಂಬೈ ಆರಂಭದ ಮೂರು ಓವರ್ ಗಳಲ್ಲೇ ಎರಡು ವಿಕೆಟ್ ಕಳೆದುಕೊಂಡಿತು. ಈ ಮೂಲಕ ಮೂರು ಓವರ್‍ನಲ್ಲೇ ಎರಡು ವಿಕೆಟ್ ಕಳೆದುಕೊಂಡು ಮುಂಬೈ ಇಂಡಿಯನ್ಸ್ ಮುಗ್ಗರಿಸಿತು. ಆರಂಭಿಕ ಆಟಗಾರ ಕಿಶನ್ 58 ಬಾಲ್‍ಗೆ 99 ರನ್ ಗಳಿಸಿದರು. ಅದ್ಭುತ ಪ್ರದರ್ಶನದಿಂದಾಗಿ ಒಂದು ಹಂತಕ್ಕೆ ತಲುಪಿತು. ಆದರೆ ಕಿಶನ್ ಹಾಗೂ ಪೋಲಾರ್ಡ್ ಪ್ರಯತ್ನ ವಿಫಲವಾಯಿತು. ಹೀಗಾಗಿ ಪಂದ್ಯ ಟೈ ಆಗುವ ಮೂಲಕ ಸೂಪರ್ ಓವರ್ ಹಂತ ತಲುಪಿತು.

ಸೂಪರ್ ಓವರ್ ನಲ್ಲಿ ನವದೀಪ್ ಸೈನಿ ಬೌಲಿಂಗ್ ಮಾಡಿದರು. ಪೋಲಾರ್ಡ್ ನಾಲ್ಕನೇ ಬಾಲ್‍ಗೆ ಫೋರ್ ಬಾರಿಸಿದರೆ, ಐದನೇ ಬಾಲ್‍ಗೆ ಕ್ಯಾಚ್ ನೀಡಿದರು. ನಂತರ 7 ರನ್ ಬಾರಿಸಿ ಆರ್‍ಸಿಬಿಗೆ 8ರನ್‍ಗಳ ಟಾರ್ಗೆಟ್ ನೀಡಿದರು. ಮುಂಬೈ ಪರ ಜಸ್‍ಪ್ರೀತ್ ಬುಮ್ರಾ ಬೌಲಿಂಗ್ ಮಾಡಿದರೆ, ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಜೊತೆಯಟವಾಡಿದರು. ಆರಂಭದ ಎರಡು ಬಾಲ್ ಸಿಂಗಲ್ಸ್ ನಂತರ ನಾಲ್ಕನೇ ಬಾಲ್‍ಗೆ ಡಿವಿಲಿಯರ್ಸ್ ಬೌಂಡರಿ ಬಾರಿಸಿದರು. ಮತ್ತೆ ಐದನೇ ಬಾಲ್ ಸಿಂಗಲ್ ತೆಗೆದುಕೊಂಡರೆ, ಕೊನೆಯ ಬಾಲ್‍ಗೆ ವಿರಾಟ್ ಕೊಹ್ಲಿ ಬೌಂಡರಿ ಬಾರಿಸಿದರು.


ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಹೊಸ ದಾಖಲೆ ಬರೆದ ಎಬಿ ಡಿವಿಲಿಯರ್ಸ್

ದುಬೈ: ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರೋಚಕ ಗೆಲುವು ಸಾಧಿಸಿದೆ. ಸೂಪರ್ ಓವರ್ ಕದನದಲ್ಲಿ ಗೆದ್ದ ಬೆಂಗಳೂರು ಕೂಟದ ಎರಡನೇ ಗೆಲುವು ಸಾಧಿಸಿದೆ.



ಆಕರ್ಷಕ ಅರ್ಧಶತಕ ಬಾರಿಸಿದ ಎಬಿ ಡಿವಿಲಿಯರ್ಸ್ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ. ಐಪಿಎಲ್ ನಲ್ಲಿ 4500 ರನ್ ಗಡಿ ದಾಟಿದ ಎರಡನೇ ವಿದೇಶಿ ಆಟಗಾರನಾಗಿ ಹೊರಹೊಮ್ಮಿದ್ದಾರೆ.

ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ 24 ಎಸೆತಗಳನ್ನು ಎದುರಿಸಿದ ಎಬಿಡಿ ಅಜೇಯ 55 ರನ್ ಬಾರಿಸಿದ್ದರು. ನಾಲ್ಕು ಸಿಕ್ಸರ್ ನಾಲ್ಕು ಬೌಂಡರಿ ಬಾರಿಸಿದ ಎಬಿಡಿ ತಂಡದ ಮೊತ್ತವನ್ನು ಇನ್ನೂರರ ಗಡಿ ದಾಟಿಸುವಲ್ಲಿ ಸಹಾಯಕವಾಗಿದ್ದರು.

ಐಪಿಎಲ್ ನಲ್ಲಿ 4500 ರನ್ ಬಾರಿಸಿದ ಆರನೇ ಆಟಗಾರ, ಎರಡನೇ ವಿದೇಶಿ ಆಟಗಾರನಾಗಿ ಎಬಿಡಿ ಮೂಡಿಬಂದರು. ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಮೊದಲ ಸ್ಥಾನದಲ್ಲಿದ್ದರೆ, ನಂತರ ಸುರೇಶ್ ರೈನಾ, ರೋಹಿತ್ ಶರ್ಮಾ, ಡೇವಿಡ್ ವಾರ್ನರ್ ಮತ್ತು ಶಿಖರ್ ಧವನ್ ಇದ್ದಾರೆ.


8/23/2020

IPL 2020; ಕ್ರೀಡಾಂಗಣ ಪ್ರವೇಶಿಸಲು ಫ್ಯಾನ್ಸ್‌ಗೆ ಇದೆಯಾ ಅವಕಾಶ? ECB ಪ್ರತಿಕ್ರಿಯೆ !...

 13ನೇ ಆವೃತ್ತಿ ಐಪಿಎಲ್ ಟೂರ್ನಿ ಸೆಪ್ಟೆಂಬರ್ 19 ರಿಂದ ದುಬೈನಲ್ಲಿ ಆರಂಭಗೊಳ್ಳುತ್ತಿದೆ. ಕೊರೋನಾ ವೈರಸ್ ಕಾರಣಸದ್ಯ ದುಬೈನಲ್ಲಿ ಬೀಡುಬಿಟ್ಟಿರುವ ಕ್ರಿಕೆಟಿಗರು ಕ್ವಾರಂಟೈನ್‌ನಲ್ಲಿದ್ದಾರೆ. ಭಾರತದಲ್ಲಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದೆ. ಆದರೆ ದುಬೈನಲ್ಲಿ ವೈರಸ್ ನಿಯಂತ್ರಣದಲ್ಲಿದೆ.ಟೂರ್ನಿ ಆರಂಭದ ವೇಳೆ ಕೊರೋನಾ ಪರಿಸ್ಥಿತಿ ಅವಲೋಕರಿಸಲಿದ್ದೇವೆ. ಐಪಿಎಲ್ ಟೂರ್ನಿಯಿಂದ ಕೊರೋನಾ ಹರಡುವಿಕೆ ಅಂಕಿ ಅಂಶ ಪರಿಶೀಲಿಸಲಿದ್ದೇವೆ.ಇದರ ಆಧಾರದಲ್ಲಿ ಅಭಿಮಾನಿಗಳಿಗೆ ಅವಕಾಶ ಮಾಡಿಕೊಡಲಾಗುವುದು. ಇದಕ್ಕೆ ದುಬೈ ಸರ್ಕಾರದ ಅನುಮತಿ ಅಗತ್ಯ ಎಂದು ECB ಹೇಳಿದೆ.


ರೋಹಿತ್ ಶರ್ಮಾ, ರಾಣಿ ಸೇರಿ ಐವರಿಗೆ ಖೇಲ್ ರತ್ನ ಪ್ರಶಸ್ತಿ ಗೌರವ

 ಐಪಿಎಲ್ ಟೂರ್ನಿಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಹಿಟ್‌ ಮ್ಯಾನ್‌ ಖ್ಯಾತಿಯ ರೋಹಿತ್ ಶರ್ಮಾಗೆ ಕ್ರೀಡಾ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿಯಾದ ರಾಜೀವ್ ಗಾಂಧಿ ಖೇಲ್‌ ರತ್ನ ಪ್ರಶಸ್ತಿ ಒಲಿದು ಬಂದಿದೆ. ಇದರೊಂದಿಗೆ ಖೇಲ್ ರತ್ನ ಪ್ರಶಸ್ತಿ ಪಡೆದ ನಾಲ್ಕನೇ ಕ್ರಿಕೆಟಿಗ ಎನ್ನುವ ಗೌರವಕ್ಕೆ ರೋಹಿತ್ ಶರ್ಮಾ ಪಾತ್ರರಾಗಿದ್ದಾರೆ. ಈ ಮೊದಲು ಸಚಿನ್ ತೆಂಡುಲ್ಕರ್, ಎಂ ಎಸ್. ಧೋನಿ ಹಾಗೂ ವಿರಾಟ್ ಕೊಹ್ಲಿ ಖೇಲ್ ರತ್ನ ಪ್ರಶಸ್ತಿಗೆ ಭಾಜನರಾಗಿದ್ದರು. ಇದೀಗ ರೋಹಿತ್ ಶರ್ಮಾ ಜತೆ ಪ್ಯಾರಾ ಅಥ್ಲೀಟ್ ಮರಿಯಪ್ಪನ್ ತಂಗವೇಲ್, ಟೇಬಲ್ ಟೆನಿಸ್ ಆಟಗಾರ್ತಿ ಮನಿಕಾ ಭಾತ್ರ, ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಹಾಗೂ ಭಾರತ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್ ಕೂಡಾ ಅತ್ಯುನ್ನತ ಕ್ರೀಡಾ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ದುಬೈನಲ್ಲಿ RCB ತಂಡ ಸೇರಿಕೊಂಡ ABD ಸೇರಿದಂತೆ ಸೌತ್ ಆಫ್ರಿಕಾ ಕ್ರಿಕೆಟರ್ಸ್!

  IPL ಟೂರ್ನಿ ರಂಗು ಕಳೆಗಟ್ಟಿದೆ. ಭಾರತದಲ್ಲಿ 13ನೇ ಆವೃತ್ತಿ IPL ಟೂರ್ನಿ ನಡೆಯದಿದ್ದರೂ ಭಾರತೀಯರಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಕೊರೋನಾ ವೈರಸ್ ಕಾರಣ ಸೆಪ್ಟೆಂಬರ್ 19 ರಿಂದ ದುಬೈನಲ್ಲಿ ಆರಂಭವಾಗುತ್ತಿರುವ ಐಪಿಎಲ್ ಟೂರ್ನಿಗಾಗಿ ಇದೀಗ 8 ತಂಡಗಳು ದುಬೈಗೆ ತೆರಳಿದೆ. RCB ಕೂಡ ದುಬೈನ ಹೋಟೆಲ್ ಒಂದರಲ್ಲಿ ಕ್ವಾರಂಟೈನ್ ಆಗಿದೆ. ಇದೀಗ ದುಬೈನಲ್ಲಿರುವ RCB ತಂಡದ ಜೊತೆಗೆ ಫೇವರಿಟ್ ಕ್ರಿಕೆಟಿಗರಾದ ಎಬಿ ಡಿವಿಲಿಯರ್ಸ್ ಹಾಗೂ ,ಡೇಲ್ ಸ್ಟೇನ್ ಹಾಗೂ ಕ್ರಿಸ್ ಮಾರಿಸ್ ಸೇರಿಕೊಂಡಿದ್ದಾರೆ.


ಶುಕ್ರವಾರ(ಆ.21) ನಾಯಕ ವಿರಾಟ್ ಕೊಹ್ಲಿ ದುಬೈ ತಲುಪಿ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಇದೀಗ ಸೌತ್ ಆಫ್ರಿಕಾದಿಂದ ಆಗಮಿಸಿದ ಎಬಿ ಡಿವಿಲಿಯರ್ಸ್, ಡೇಲ್ ಸ್ಟೇನ್ ಹಾಗೂ ಕ್ರಿಸ್ ಮಾರಿಸ್ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. 7 ದಿನಗಳ ಕಾಲ ಐಪಿಎಲ್ ತಂಡದ ಕ್ರಿಕೆಟಿಗರು ಕ್ವಾರಂಟೈನ್‌ಗೆ ಒಳಪಡಲಿದ್ದಾರೆ.

ಹೊಸ ಮಾರ್ಗಸೂಚಿ, ನಿಯಮ ಹಾಗೂ ಮುಂಜಾಗ್ರತೆಗಳಿಂದ ಹಿಂದಿನ ಐಪಿಎಲ್ ಟೂರ್ನಿಗಳಲ್ಲಿ ಪ್ರಯಾಣ ಮಾಡಿದಂತೆ ಸಾಧ್ಯವಿಲ್ಲ. ಕೊರೋನಾ ವೈರಸ್ ಕಾರಣ ಎಚ್ಚರ ವಹಿಸಬೇಕಿದೆ. ಸದ್ಯ ಐಪಿಲ್ ಟೂರ್ನಿಗಾಗಿ ದುಬೈಗೆ ಆಗಮಿಸಿರುವುದು ಸಂತಸ ತಂದಿದೆ. ಉತ್ತಮ ಟೂರ್ನಿಯನ್ನು ಎದುರನೋಡುತ್ತಿದ್ದೇನೆ. ಜೊತೆಗೆ ತಂಡ ಸೇರಿಕೊಂಡಿರುವ ಹೊಸ ಮುಖಗಳನ್ನು ನೋಡಲು, ಅವರ ಜೊತೆ ಒಟ್ಟಾಗಿ ಆಡಲು ಉತ್ಸುಕನಾಗಿದ್ದೇನೆ ಎಂದು ಎಬಿ ಡಿವಿಲಿಯರ್ಸ್ ಹೇಳಿದ್ದಾರೆ.

ತಂಡದ ವೇಗಿ ಡೇಲ್ ಸ್ಟೇನ್ ಕೂಡ ಮತ್ತೆ ಆರ್‌ಸಿಬಿ ಸೇರಿಕೊಂಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ ತೀವ್ರ ಉಷ್ಣತೆ ಇದೆ. ಈ ಬಿಸಿ ವಾತಾವರಣದಲ್ಲಿ ಪ್ರದರ್ಶನ ಸವಾಲಿನ ಕೆಲಸ ಎಂದಿದ್ದಾರೆ.

ಭಾರತದಲ್ಲಿ ಕೊರೋನಾ ವೈರಸ್ ನಿಯಂತ್ರಣಕ್ಕೆ ಬಾರದ ಹಿನ್ನಲೆಯಲ್ಲಿ ಬಿಸಿಸಿಐ, ಐಪಿಎಲ್ ಟೂರ್ನಿಯನ್ನು ದುಬೈಗೆ ಸ್ಥಳಾಂತರ ಮಾಡಿದೆ. ಸೆಪ್ಟೆಂಬರ್ 19 ರಿಂದ ಟೂರ್ನಿ ಆರಂಭಗೊಳ್ಳಲಿದೆ. ನವೆಂಬರ್ 10 ರಂದು ಫೈನಲ್ ಪಂದ್ಯ ನಡೆಯಲಿದೆ. 

ಹಾಲಿ ಟೀಂ ಇಂಡಿಯಾ VS ಮಾಜಿ ಕ್ರಿಕೆಟರ್ಸ್ ಚಾರಿಟಿ ಪಂದ್ಯ: ದಿಗ್ಗಜರ ತಂಡ ಪ್ರಕಟಿಸಿದ ಇರ್ಫಾನ್!

 ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಹಾಗೂ ಎಂ.ಎಸ್.ಧೋನಿ ನೇತೃತ್ವದ ಮಾಜಿ ಕ್ರಿಕೆಟಿಗರ ತಂಡ ನಡುವಿನ ಪಂದ್ಯ ಇತರ ಎಲ್ಲಾ ಕ್ರಿಕೆಟ್ ಹೋರಾಟಕ್ಕಿಂತ ಕುತೂಹಲ ಕೆರಳಿಸಲಿದೆ. ಇಂತಹ ಒಂದು ಹೊಸ ಪ್ರಸ್ತಾವನೆಯನ್ನು ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಮುಂದಿಟ್ಟಿದ್ದಾರೆ. ಎಂ.ಎಸ್.ಧೋನಿಗೆ ಸರಿಯಾಗಿ ವಿದಾಯದ ಪಂದ್ಯ ಸಿಕ್ಕಿಲ್ಲ. ಹೀಗಾಗಿ ಧೋನಿಗೆ ವಿದಾಯದ ಪಂದ್ಯ ಆಯೋಜಿಸಬೇಕು ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇದರ ನಡುವೆ ಪಠಾಣ್ ಹೊಸ ಪ್ರಸ್ತಾವನೆ ಇಡೋ ಮೂಲಕ ಎಲ್ಲರ ಗಮನಸೆಳೆದಿದ್ದಾರೆ.


ಧೋನಿಯಂತೆ ಟೀಂ ಇಂಡಿಯಾದ ಹಲವು ದಿಗ್ಗಜ ಕ್ರಿಕೆಟಿಗರು ವಿದಾಯದ ಪಂದ್ಯ ಆಡದೇ ನಿವೃತ್ತಿ ಘೋಷಿಸಿದ್ದಾರೆ. ಈ ರೀತಿ ಸರಿಯಾದ ವಿದಾಯದ ಪಂದ್ಯ ಸಿಗದ ಮಾಜಿ ಕ್ರಿಕೆಟಿಗರು ಹಾಗೂ ಹಾಲಿ ಟೀಂ ಇಂಡಿಯಾ ನಡುವೆ ಚಾರಿಟಿ ಪಂದ್ಯಕ್ಕೆ ಪ್ರಸ್ತಾವನೆ ಇಟ್ಟಿದ್ದಾರೆ. ವಿಶೇಷ ಅಂದರೆ ಇರ್ಫಾನ್ ಪಠಾಣ್ ಮಾಜಿ ಟೀಂ ಇಂಡಿಯಾ XI ತಂಡವನ್ನು ಪ್ರಕಟಿಸಿದ್ದಾರೆ.

ವಿದಾಯದ ಪಂದ್ಯ ಸಿಗದೆ ನಿವೃತ್ತಿಯಾದ 11 ದಿಗ್ಗಜ ಕ್ರಿಕೆಟಿಗರ ತಂಡವನ್ನು ಇರ್ಫಾನ್ ಪಠಾಣ್ ಪ್ರಕಟಿಸಿದ್ದಾರೆ. ಇದರಲ್ಲಿ ಸಚಿನ್ ತೆಂಡುಲ್ಕರ್‌ ಸ್ಥಾನ ಪಡೆದಿಲ್ಲ. ಕಾರಣ ಸಚಿನ್‌ ವಿದಾಯದ ಪಂದ್ಯ ಆಡಿ ನಿವೃತ್ತಿ ಹೇಳಿದ್ದಾರೆ. ಇನ್ನುಳಿದಂತೆ ಧೋನಿ, ವಿರೇಂದ್ರ ಸೆಹ್ವಾಗ್ ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷಣ್, ಯುವರಾಜ್ ಸಿಂಗ್, ಸುರೇಶ್ ರೈನಾ ಸೇರಿದಂತೆ ದಿಗ್ಗಜ ಕ್ರಿಕೆಟಿಗರು ಮಾಜಿ ಟೀಂ ಇಂಡಿಯಾ XI ತಂಡದಲ್ಲಿದ್ದಾರೆ.

ಇರ್ಫಾನ್ ಪಠಾಣ್ ಪ್ರಕಟಿಸಿದ ಮಾಜಿ ಟೀಂ ಇಂಡಿಯಾ XI
ಗೌತಮ್ ಗಂಭೀರ್
ವಿರೇಂದ್ರ ಸೆಹ್ವಾಗ್
ರಾಹುಲ್ ದ್ರಾವಿಡ್
ವಿವಿಎಸ್ ಲಕ್ಷ್ಮಣ್
ಯುವರಾಜ್ ಸಿಂಗ್
ಸುರೇಶ್ ರೈನಾ
ಎಂ.ಎಸ್.ಧೋನಿ
ಇರ್ಫಾನ್ ಪಠಾಣ್
ಅಜಿತ್ ಅಗರ್ಕರ್
ಜಹೀರ್ ಖಾನ್
ಪ್ರಗ್ಯಾನ್ ಓಜಾ

8/22/2020

ನಿವೃತ್ತಿಯಿಂದ ವಾಪಸ್ ಬನ್ನಿ: ಕ್ರಿಕೆಟಿಗ ಯುವರಾಜ್ ಸಿಂಗ್ ಗೆ ಮನವಿ

 ಮುಂಬೈ: 2011 ರ ವಿಶ್ವಕಪ್ ಗೆಲುವಿನ ಹೀರೋ ಯುವರಾಜ್ ಸಿಂಗ್ ಕ್ರಿಕೆಟ್ ಗೆ ನಿವೃತ್ತಿ ಹೇಳಿ ವರ್ಷವಾಗುತ್ತಿದೆ. ಈ ನಡುವೆ ಅವರ ತವರು ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ನಿವೃತ್ತಿ ನಿರ್ಧಾರದಿಂದ ಹಿಂದೆ ಬರುವಂತೆ ಒತ್ತಾಯಿಸಿದೆ.


ನಿವೃತ್ತಿಯಿಂದ ಹಿಂದೆ ಬಂದು ಮತ್ತೆ ತವರು ಪಂಜಾಬ್ ಪರ ಆಡುವಂತೆ ಕಾರ್ಯದರ್ಶಿ ಪುನೀತ್ ಬಾಲಿ ಮನವಿ ಮಾಡಿದ್ದಾರೆ. ಆದರೆ ಈ ಮನವಿಗೆ ಯುವಿ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಪಂಜಾಬ್ ತಂಡಕ್ಕೆ ಈಗ ಅನುಭವಿ ಆಟಗಾರರ ಕೊರತೆಯಿದೆ. ಯುವರಾಜ್ ರಂತಹ ಆಟಗಾರರು ಕಣಕ್ಕೆ ಇಳಿದರೆ ಪಂಜಾಬ್ ತಂಡ ಬಲಗೊಳ್ಳಬಹುದು ಎಂಬುದು ಅವರ ಲೆಕ್ಕಾಚಾರ. ಅದೇ ಕಾರಣಕ್ಕೆ ಯುವಿಗೆ ನಿವೃತ್ತಿ ಬಿಟ್ಟು ವಾಪಸ್ ತಂಡಕ್ಕೆ ಬರುವಂತೆ ಮನವಿ ಮಾಡಿದ್ದಾರೆ.

8/20/2020

ಧೋನಿಗೆ ಬೀಳ್ಕೊಡುಗೆ ಪಂದ್ಯ ಆಯೋಜಿಸಲು ಬಿಸಿಸಿಐ ಉತ್ಸುಕ

YouTube channel 

ನವದೆಹಲಿ: ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್ ನ ಎಲ್ಲಾ ಮಾದರಿಗಳಿಗೂ ನಿವೃತ್ತಿ ಘೋಷಿಸಿದ್ದ ಎಂಎಸ್ ಧೋನಿಗೆ ಬೀಳ್ಕೊಡುಗೆ ಪಂದ್ಯವನ್ನು ಆಯೋಜಿಸಲು ಬಿಸಿಸಿಐ ಚಿಂತನೆ ನಡೆಸಿದೆ. 

ಐಎಎನ್ಎಸ್ ಜೊತೆ ಮಾತನಾಡಿರುವ ಬಿಸಿಸಿಐ ಅಧಿಕಾರಿ "ಬಿಸಿಸಿಐ ಧೋನಿ ಜೊತೆ ಮಾತನಾಡಲಿದ್ದು, ಅದರ ನಂತರ ಯೋಜನೆ ರೂಪಿಸಲಾಗುವುದು ಎಂದು ತಿಳಿಸಿದ್ದಾರೆ. 

ಈಗ ಯಾವುದೇ ಅಂತಾರಾಷ್ಟ್ರೀಯ ಸರಣಿಗಳು ಇಲ್ಲ. ಐಪಿಎಲ್ ನಂತರ ಏನು ಮಾಡಬೇಕೆಂಬ ಬಗ್ಗೆ ತೀರ್ಮಾನಿಸುತ್ತೇವೆ, ಏಕೆಂದರೆ ದೇಶಕ್ಕಾಗಿ ಧೋನಿ ಸಾಕಷ್ಟು ಮಾಡಿದ್ದಾರೆ, ಅವರು ಎಲ್ಲಾ ಗೌರವಗಳಿಗೂ ಅರ್ಹರು, ಧೋನಿಗೆ ಬೀಳ್ಕೊಡುಗೆ ಪಂದ್ಯವನ್ನು ಆಯೋಜಿಸಬೇಕೆಂಬುದು ನಮ್ಮ ಅಭಿಪ್ರಾಯವಾಗಿತ್ತು. ಆದರೆ ಧೋನಿ ಭಿನ್ನ ಆಟಗಾರ ಅದರ ಬಗ್ಗೆ ಯಾರೂ ಯೋಚನೆಯನ್ನೂ ಮಾಡದ ಸಂದರ್ಭದಲ್ಲೇ ಅವರು ನಿವೃತ್ತಿ ಘೋಷಣೆ ಮಾಡಿದ್ದಾರೆಂದು ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ. 

ಐಪಿಎಲ್ ವೇಳೆ ಧೋನಿ ಜೊತೆ ಬೀಳ್ಕೊಡುಗೆ ಪಂದ್ಯದ ಬಗ್ಗೆ ಮಾತನಾಡಲಾಗುವುದು ಎಂದು ಅಧಿಕಾರಿ ಹೇಳಿದ್ದಾರೆ. 


Fore more information visit our YouTube channel

https://youtu.be/ywCCXO30OQA

8/11/2020

BCCI invited bid for IPL title sponsorship

 New Delhi : The Indian Cricket Control Board (BCCI) on Monday called for an 'expression of interest' (bid) for the title sponsorship of the Indian Premier League 13 season in the UAE from September 19 to November 10.

"The rights are only available for the period from August 18, 2020 to December 31, 2020. The rights are provided only to individuals who submit and qualify for EOI, with details regarding the products and product categories available," the BCCI said.

"According to the last audited accounts, the interested third party's turnover should be around Rs 300 crore," the BCCI said in its official statement. The BCCI has requested in its mail that interested 'third parties' send their 'expressions of interest' by 5 pm on August 14, 2020.

Following the issuance of the EOI, the BCCI addresses the rights, product categories and eligibility for qualified third parties. The final bid must be sent to eoi@bcci.tv between 11am and 1pm on 18 August 2020, ”the BCCI said in its mail


8/10/2020

ಐಪಿಎಲ್‌ | ಮಾಸಾಂತ್ಯದಲ್ಲಿ ಯುಎಇಗೆ ಪಯಣಿಸಲಿರುವ ಆರ್‌ಸಿಬಿ

 ಬೆಂಗಳೂರು: ರಾಯಲ್ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡವು ಈ ಮಾಸಾಂತ್ಯದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ಪ್ರಯಾಣ ಬೆಳೆಸಲಿದೆ.


ಸೆಪ್ಟೆಂಬರ್ 19ರಿಂದ ನವೆಂಬರ್ 10ರವರೆಗೆ ಯುಎಇಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿ ನಡೆಯಲಿದೆ. ಅದರಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಆರ್‌ಸಿಬಿ ಆಡಲಿದೆ.



ಐಪಿಎಲ್‌ ತಂಡಗಳಿಗಾಗಿ ಬಿಸಿಸಿಐ ಮಾರ್ಗದರ್ಶಿ ಸೂತ್ರಗಳನ್ನು ನೀಡಿದೆ. ಅದರ ಅನ್ವಯ ಆರ್‌ಸಿಬಿ ತಂಡ, ಪ್ರ ಯಾಣಕ್ಕೂ ಮುನ್ನ ಬೆಂಗಳೂರಿನ ಹೋಟೆಲ್‌ವೊಂದರಲ್ಲಿ ಕ್ವಾರಂಟೈನ್ ಪೂರೈಸಲಿದೆ. 

ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್‌ ತಂಡದ ಆಟಗಾರರನ್ನು ಮುಂಬೈನ ಹೋಟೆಲ್‌ನಲ್ಲಿ ಪ್ರತ್ಯೇಕವಾಸಕ್ಕೆ ಒಳಪಡಿಸಲಾಗುತ್ತಿದೆ. ಚೆನ್ನೈ ಸೂಪರ್ ಕಿಂಗ್ಸ್‌ ತಂಡವು ಯುಎಇಗೆ ತೆರಳುವ ಮುನ್ನ ಕೆಲವು ದಿನಗಳ ಅಭ್ಯಾಸ ಶಿಬಿರವನ್ನು ನಡೆಸಲಿದೆ ಎಂದು ತಿಳಿದುಬಂದಿದೆ.

ಸದ್ಯ ನಮ್ಮ ಆಟಗಾರರು ಮತ್ತು ಸಿಬ್ಬಂದಿಗೆ ಗೃಹಬಂಧನಕ್ಕಾಗಿ ಹೇಳಲಾಗಿದೆ. ಶೀಘ್ರದಲ್ಲಿಯೇ ಹೋಟೆಲ್ ಕ್ವಾರಂಟೈನ್‌ಗೂ ಒಳಪಡಿಸಲಾಗುವುದು. ಈ ತಿಂಗಳ ಅಂತ್ಯದಲ್ಲಿ ಯುಎಇಗೆ ತೆರಳುವ ಕುರಿತು ಯೋಚಿಸಿದ್ದೇವೆ’ ಎಂದು ಆರ್‌ಸಿಬಿ ಮುಖ್ಯಸ್ಥ ಸಂಜಯ್ ಚೂರಿವಾಲಾ ಅವರು ’ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಆಗಸ್ಟ್‌ 14ರಿಂದಲೇ ಹೋಟೆಲ್ ಕ್ವಾರಂಟೈನ್ ಆರಂಭವಾಗುವ ಸಾಧ್ಯತೆ ಇದೆ. ಆದರೆ ಇದರಲ್ಲಿ ವಿದೇಶಿ ಆಟಗಾರರು ಇರುವುದಿಲ್ಲ. ಅವರೆಲ್ಲರೂ ತಮ್ಮ ದೇಶಗಳಿಂದ ನೇರವಾಗಿ ಯುಎಇಗೆ ತೆರಳುವರು.


8/08/2020

ಐಪಿಎಲ್‌ ತಂಡ​ಗ​ಳಿಗೆ 40-50 ಕೋಟಿ ರುಪಾಯಿ ನಷ್ಟ

 ನವ​ದೆ​ಹ​ಲಿ(ಆ.07): ಕೊರೋನಾ ಸಂಕಷ್ಟದ ನಡುವೆಯೂ ಈ ವರ್ಷ ಐಪಿ​ಎಲ್‌ ನಡೆ​ಸಲು ಬಿಸಿ​ಸಿಐ ವ್ಯವಸ್ಥೆ ಮಾಡಿ​ದ್ದರೂ, ಫ್ರಾಂಚೈಸಿ​ಗ​ಳಿಗೆ ದೊಡ್ಡ ನಷ್ಟ ಎದು​ರಾ​ಗ​ಲಿದೆ ಎಂದು ವರ​ದಿ​ಯಾ​ಗಿದೆ. 



ಟೈಟಲ್‌ ಪ್ರಾಯೋ​ಜ​ಕತ್ವ ಹೊಂದಿದ್ದ ವಿವೋ ಸಂಸ್ಥೆ ಬಿಸಿ​ಸಿ​ಐಗೆ ವಾರ್ಷಿಕ 440 ಕೋಟಿ ರು. ಪಾವ​ತಿ​ಸು​ತ್ತಿತ್ತು. ಇದ​ರಲ್ಲಿ ಶೇ.50ರಷ್ಟು ಮೊತ್ತವನ್ನ ಬಿಸಿ​ಸಿಐ, ಫ್ರಾಂಚೈ​ಸಿ​ಗ​ಳಿಗೆ ಹಂಚು​ತ್ತಿತ್ತು. ಅಂದರೆ ಪ್ರತಿ ಫ್ರಾಂಚೈ​ಸಿಗೆ 27.5 ಕೋಟಿ ರು. ಸಿಗು​ತ್ತಿತ್ತು. ಆದರೆ ಈ ವರ್ಷ ವಿವೋ ಪ್ರಾಯೋ​ಜ​ಕತ್ವದಿಂದ ಹಿಂದೆ ಸರಿ​ದಿದ್ದು, ನೂತನ ಪ್ರಾಯೋ​ಜ​ಕತ್ವದ ಮೌಲ್ಯ, ಗರಿಷ್ಠ 300 ಕೋಟಿಯಷ್ಟು ಇರ​ಬ​ಹುದು ಎಂದು ವಿಶ್ಲೇ​ಷಿ​ಸ​ಲಾ​ಗಿದೆ. 

ಹೀಗಾಗಿ, ಫ್ರಾಂಚೈ​ಸಿ​ಗ​ಳಿಗೆ ಏನಿ​ಲ್ಲ​ವೆಂದ​ರೂ 12ರಿಂದ 15 ಕೋಟಿ ರು. ಕಡಿಮೆ ಸಿಗಲಿದೆ. ಜತೆಗೆ ಟಿಕೆಟ್‌ ಮಾರಾಟದಿಂದ ಪ್ರತಿ ವರ್ಷ ಫ್ರಾಂಚೈ​ಸಿ​ಗ​ಳಿಗೆ ಅಂದಾಜು 25 ಕೋಟಿ ಸಿಗು​ತ್ತಿತ್ತು. ಈ ವರ್ಷ ಪ್ರೇಕ್ಷ​ಕ​ರಿಗೆ ನಿರ್ಬಂಧ ಹೇರ​ಲಿ​ರುವ ಕಾರಣ, ಆ ಮೊತ್ತವೂ ಸಿಗು​ವು​ದಿಲ್ಲ. ಇತರ ಪ್ರಾಯೋ​ಜ​ಕ​ತ್ವದ ಮೌಲ್ಯವೂ ಕಡಿತಗೊಳ್ಳುವ ಸಾಧ್ಯತೆ ಇದೆ.

ಕೊರೋನಾ ಭೀತಿಯಿಂದಾಗಿ ಬಹು ನಿರೀಕ್ಷಿತ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಭಾರತದಿಂದ ಯುಎಇಗೆ ಸ್ಥಳಾಂತರವಾಗಿದೆ. ಸೆಪ್ಟೆಂಬರ್ 19ರಿಂದ ನವೆಂಬರ್ 10ರವರೆಗೆ ಐಪಿಎಲ್ ಟೂರ್ನಿ ಜರುಗಲಿದೆ.

8/07/2020

IPL 2020 | ‘If I can help take pressure off Virat, I’ll do everything I can’: How Aaron Finch hopes to help Kohli in RCB

 

IPL 2020: Finch comes with the experience of having played 61 T20Is for Australia, 75 matches in the IPL and another 62 in the Big Bash League. A former No. 1 batsman in the ICC T20 rankings, Finch is currently No. 3 in the list and his addition bodes well for the RCB.


Aaron Finch is looking forward to playing under Virat Kohli in the IPL 2020. The Australia opener, who was procured by Royal Challengers Bangalore at the IPL auction for Rs 4.4 crore in December last year, along with Kohli, is expected to solve the batting woes of the franchise, a detrimental factor behind their IPL struggles.
Finch comes with an experience of having played 61 T20Is for Australia, 75 matches in the IPL and another 62 in the Big Bash League. A former No. 1 batsman in the ICC T20 rankings, Finch is currently No. 3 in the list and his addition bodes well for the RCB for the IPL 2020, starting September 19 in the UAE.

It will be my first time playing under Virat’s leadership but something I’m very excited about. Having played against him for a number of years now in international cricket and IPL I know how driven and competitive he is, that something I’m looking forward to seeing up close,” Finch told ANI.

“I hope that my experience will come in handy, being able to help out anyone I can during the IPL. If that means I can help take some pressure off Virat then I will do everything I have to.”


8/04/2020

ಬಿಸಿಸಿಐಗೆ ಶಾಕ್ ಕೊಟ್ಟ ಚೀನಾ ಕಂಪನಿ: ಐಪಿಎಲ್ ಪ್ರಾಯೋಜಕತ್ವದಿಂದ ವಿವೋ ಹೊರಕ್ಕೆ

ನವದೆಹಲಿ: ಗಲ್ವಾನ್ ಕಣಿವೆಯಲ್ಲಿ ಚೀನಾ ಸಂಘರ್ಷದ ಬಳಿಕ ಭಾರತದಲ್ಲಿ ಚೀನಾ ಆ್ಯಪ್ ಹಾಗೂ ಸರಕುಗಳನ್ನು ಬ್ಯಾನ್ ಮಾಡಲಾಗಿತ್ತು. ಇದೇ ವೇಳೆ ಐಪಿಎಲ್ ವಿವೋ ಪ್ರಾಯೋಜಕತ್ವವನ್ನು ರದ್ದು ಮಾಡುವಂತೆ ಕೂಗು ಜಾರಾಗಿತ್ತು. ಆದರೆ ಇದೀಗ ಚೀನಾ ಕಂಪನಿ ವಿವೋ ಭಾರತಕ್ಕೆ ಶಾಕ್ ನೀಡಿದೆ. 


ಹೌದು, ಕೊರೋನಾ ಮಹಾಮಾರಿ ನಡುವೆಯೂ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಆಯೋಜಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿರುವಾಗಲೇ ಅತ್ತ ಚೀನಾ ಸಂಸ್ಥೆ ವಿವೋ ಶೀರ್ಷಿಕೆ ಪ್ರಯೋಜಕತ್ವದಿಂದ ಹೊರಬಂದಿದೆ. 

ಯುಎಇಯಲ್ಲಿ ಐಪಿಎಲ್ ಆಯೋಜಿಸಲು ಬಿಸಿಸಿಐ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಇದರ ಮಧ್ಯೆ ವಿವೋ ಬಿಸಿಸಿಐಗೆ ದೊಡ್ಡ ಶಾಕ್ ನೀಡಿದೆ. 

ಈ ವರ್ಷ ಐಪಿಎಲ್ ಪ್ರಾಯೋಜಕರಾಗಿ ಹೊರಗುಳಿಯುವುದಾಗಿ ವಿವೋ ಬಿಸಿಸಿಐಗೆ ಮಾಹಿತಿ ನೀಡಿದೆ. ಇನ್ನು ಈ ಆವೃತ್ತಿಯ 440 ಕೋಟಿ ರೂ. ಪಾವತಿಸುವ ಅಥವಾ ಬದಲಿ ಪಡೆಯುತ್ತದೆಯೇ ಎಂದು ಬಿಸಿಸಿಐ ಖಚಿತವಾಗಿಲ್ಲ.

8/03/2020

ಈ ಬಾರಿ 53 ದಿನಗಳ ಐಪಿಎಲ್: ಯುಎಇಯಲ್ಲಿ ನಡೆಸಲು ಆಡಳಿತ ಸಮಿತಿ ಸಮ್ಮತಿ

ನವದೆಹಲಿ: ಯುನೈಟೆಡ್ ಅರಬ್ ಎಮಿರೆಟ್ಸ್‌ನಲ್ಲಿ ನಡೆಸಲು ಉದ್ದೇಶಿಸಲಾಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯ ವೇಳಾಪಟ್ಟಿಯನ್ನು ಅಂತಿಮಗೊಳಿಸಲಾಗಿದೆ.

ಸೆಪ್ಟೆಂಬರ್‌ 19ರಿಂದ ಟೂರ್ನಿ ಆರಂಭವಾಗಲಿದ್ದು, ನವೆಂಬರ್ 10ರಂದು ಫೈನಲ್ ಪಂದ್ಯ ನಡೆಯಲಿದೆ. ಈ ಮೊದಲು ನವೆಂಬರ್ 8ರಂದು ನಡೆಸಲಾಗುವುದು ಎಂದು ಹೇಳಲಾಗಿತ್ತು. 


'ಫೈನಲ್ ಪಂದ್ಯವು ನಡೆಯುವ ವೇಳೆಯು ದೀಪಾವಳಿಯ ಹಬ್ಬದ ಸಮಯವಾಗಿದೆ. ಆದ್ದರಿಂದ ಅಧಿಕೃತ ಪ್ರಸಾರಕರಿಗೆ ಹೆಚ್ಚು ದಿನಗಳ ಅವಧಿ ಲಭಿಸಿದರೆ ಹೆಚ್ಚು ಲಾಭವಾಗುತ್ತದೆ. ಆದ್ದರಿಂದ ಮೊದಲು ಯೋಚಿಸಿದ್ದಕ್ಕಿಂತ ಎರಡು ದಿನ ಹೆಚ್ಚು ಮಾಡಲಾಗಿದೆ. ಇದರಿಂದಾಗಿ 51 ದಿನಗಳ ಟೂರ್ನಿಯು 53 ದಿನವಾಗಲಿದೆ‘ ಎಂದು ಸಭೆಯಲ್ಲಿ ಭಾಗವಹಿಸಿದ್ದ ಸದಸ್ಯರೊಬ್ಬರು ತಿಳಿಸಿದ್ದಾರೆ.

’ಯುಎಇಯಲ್ಲಿ ಟೂರ್ನಿ ನಡೆಸಲು ಸದಸ್ಯರು ಒಪ್ಪಿದ್ದಾರೆ. ಫ್ರ್ಯಾಂಚೈಸ್‌ಗಳೂ ಸಹಮತ ವ್ಯಕ್ತಪಡಿಸಿವೆ. ಕೇಂದ್ರ ಸರ್ಕಾರವು ಇನ್ನೂ ಅನುಮತಿ ನೀಡಬೇಕಿದೆ. ಶೀಘ್ರದಲ್ಲಿಯೇ ಹಸಿರುನಿಶಾನೆ ಸಿಗಬಹುದು‘ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ವೈದ್ಯಕೀಯ ಸೌಲಭ್ಯಗಳನ್ನು ನೀಡಲು ಬಿಸಿಸಿಐ ದುಬೈ ಮೂಲದ ಪರಿಣತರ ಸಮೂಹವನ್ನು ಸಂಪರ್ಕಿಸಿದೆ. ಅವರಿಂದ ಯೋಜನಾ ವರದಿಗಳನ್ನೂ ತರಿಸಿಕೊಂಡಿದೆ. ಅಲ್ಲದೇ ಜೀವ ಸುರಕ್ಷಾ ನಿಯಮಗಳನ್ನು ಅನುಷ್ಠಾನಗೊಳಿಸಲು ಟಾಟಾ ಸಮೂಹ ಸಂಸ್ಥೆಯೊಂದಿಗೂ ಮಾತುಕತೆ ನಡೆಸಲಾಗುತ್ತಿದೆ‘ ಎಂದು ಹೇಳಿದರು. 

7.30ಕ್ಕೆ ಪಂದ್ಯ ಆರಂಭ: ಈ ಬಾರಿಯ ಟೂರ್ನಿಯಲ್ಲಿ ಹತ್ತು ದಿನ ಡಬಲ್ ಹೆಡರ್‌ ಪಂದ್ಯಗಳು ನಡೆಯಲಿವೆ. ಒಂದೇ ದಿನ ಎರಡು ಪಂದ್ಯಗಳನ್ನು ನಡೆಸಿ ನಿಗದಿಯ ದಿನಗಳಲ್ಲಿ ಟೂರ್ನಿ ಮುಗಿಸಲು ಪ್ರಯತ್ನಿಸಲಾಗಿದೆ.

ಅಲ್ಲದೇ ಈ ಬಾರಿ ಸಂಜೆ 7.30ಕ್ಕೆ ಪಂದ್ಯಗಳನ್ನು ಆರಂಭಿಸಲಾಗುವುದು. ಈ ಮೊದಲು ರಾತ್ರಿ 8 ಗಂಟೆಗೆ ಪಂದ್ಯಗಳು ಆರಂಭವಾಗುತ್ತಿದ್ದವು ಎಂದು ಮೂಲಗಳು ತಿಳಿಸಿರುವುದಾಗಿ ಇಂಗ್ಲಿಷ್‌ ವೆಬ್‌ಸೈಟ್‌ವೊಂದು ವರದಿ ಮಾಡಿದೆ.

8/02/2020

330 ರನ್ ಗುರಿ, ಭಾರತ 0/1: ಪಾಕ್ ವಿರುದ್ಧದ ರೋಚಕ ಪಂದ್ಯ ನೆನೆದ ಗಂಭೀರ್

ನವದೆಹಲಿ: 20,000 ಅಂತಾರಾಷ್ಟ್ರೀಯ ರನ್‌ಗಳು, ಅತ್ಯಧಿಕ ಶತಕ, ಅದ್ಭುತ ಪ್ರದರ್ಶನ ಹೀಗೆ ಎಲ್ಲದರಲ್ಲೂ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈಗ ವಿಶ್ವದಲ್ಲಿನ ಶ್ರೇಷ್ಠ ಕ್ರಿಕೆಟಿಗರ ಸಾಲಿನಲ್ಲಿ ಮುಂಚೂಣಿಯಲ್ಲಿ ಬರುತ್ತಾರೆ. ಸುಮಾರು 12 ವರ್ಷಗಳ ವೃತ್ತಿ ಜೀವನದಲ್ಲಿ ರನ್ ಮೆಷೀನ್ ಕೊಹ್ಲಿ ಅನೇಕ ದಾಖಲೆಗಳನ್ನು ಮುರಿದ್ದಾರೆ, ಮುರಿಯುತ್ತಾ ಬರುತ್ತಿದ್ದಾರೆ. ಸಚಿನ್ ತೆಂಡೂಲ್ಕರ್ ಬಿಟ್ಟರೆ, ಏಕದಿನ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ಶತಕಗಳನ್ನು ಬಾರಿಸಿರುವ ಆಲ್ ಟೈಮ್ ಬ್ಯಾಟ್ಸ್‌ಮನ್‌ಗಳಲ್ಲಿ ಕೊಹ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ.

ಕ್ರಿಕೆಟ್ ದೇವರು', ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ಹಲವಾರು ದಾಖಲೆಗಳನ್ನು ಕೊಹ್ಲಿ ಮುರಿದಿದ್ದಾಗಿದೆ. ಇನ್ನಷ್ಟು ದಾಖಲೆಗಳು ಮುರಿವುದರಲ್ಲಿದ್ದಾರೆ. ಇಂಥ ಅಪಾಯಕಾರಿ ಬ್ಯಾಟ್ಸ್‌ಮನ್ ಕೊಹ್ಲಿ ಹಲವಾರು ಅದ್ಭುತ ಇನ್ನಿಂಗ್ಸ್‌ಗಳನ್ನು ಕೊಟ್ಟಿದ್ದಾರೆ.
ವಿರಾಟ್ ಕೊಹ್ಲಿಯ ಮರೆಯಲಾರದ ಇನ್ನಿಂಗ್ಸ್‌ಗಳಲ್ಲಿ ಒಂದನ್ನು ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್ ನೆನಪಿಸಿಕೊಂಡಿದ್ದಾರೆ. ಈ ರೋಚಕ ಪಂದ್ಯ ನಡೆದಿದ್ದು ಭಾರತದ ಬದ್ಧ ಎದುರಾಳಿ ಪಾಕಿಸ್ತಾನದ ವಿರುದ್ಧ.
ಏಕದಿನದಲ್ಲಿ ವಿರಾಟ್ ಕೊಹ್ಲಿಯ ಅದ್ಭುತ ಇನ್ನಿಂಗ್ಸ್‌ ಯಾವುದು ಅಂತ ನಿಮ್ಮಲ್ಲೇನಾದರೂ ಕೇಳಿದರೆ ಯಾವುದನ್ನು ಆರಿಸುತ್ತೀರಿ? ಆಸ್ಟ್ರೇಲಿಯಾದ ವಿರುದ್ಧ 2013ರಲ್ಲಿ ಜೈಪುರದಲ್ಲಿ ಕೊಹ್ಲಿ ಬಾರಿಸಿದ 52 ಎಸೆತಗಳ ಶತಕ (ಏಕದಿನದಲ್ಲಿ ಭಾರತೀಯ ಬಾರಿಸಿದ ಅತೀ ವೇಗದ ಶತಕ), 2015ರಲ್ಲಿ ಪಾಕಿಸ್ತಾನ ವಿರುದ್ಧ ಬಾರಿಸಿದ್ದ 107 ರನ್, 2018ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅಜೇಯ 160 ರನ್, 2015ರಲ್ಲಿ ಚೆನ್ನೈನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧವೇ ಬಾರಿಸಿದ್ದ 138 ರನ್. ಇವೆಲ್ಲ ಕೊಹ್ಲಿಯ ಬೆಸ್ಟ್ ಇನ್ನಿಂಗ್ಸ್‌ಗಳು.
ಕೊಹ್ಲಿಯ ಆಕರ್ಷಕ ಇನ್ನಿಂಗ್ಸ್‌ಗಳಲ್ಲಿ ಒಂದೆಂದರೆ ಪಾಕಿಸ್ತಾನ ವಿರುದ್ಧ ಬಾರಿಸಿದ 183 ಸ್ಫೋಟಕ ರನ್. 2012ರಲ್ಲಿ ಶೇರ್ ಇ ಬಾಂಗ್ಲಾ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದಿದ್ದ ಏಷ್ಯಕಪ್‌ 5ನೇ ಪಂದ್ಯದಲ್ಲಿ ಕೊಹ್ಲಿ ವಿರಾಟ್ ರೂಪ ಪ್ರದರ್ಶಿಸಿದ್ದರು. ಕೊಹ್ಲಿಯ ಈ ಸ್ಫೋಟಕ ಇನ್ನಿಂಗ್ಸ್‌, ಹೋಬರ್ಟ್‌ನಲ್ಲಿ ಶ್ರೀಲಂಕಾ ವಿರುದ್ಧ ಬಾರಿಸಿದ್ದ 133 ರನ್ ಬಳಿಕ 20 ದಿನಗಳಲ್ಲಿ ಬಂದಿತ್ತು. ಕೊಹ್ಲಿ ಕೊಟ್ಟ ಒಳ್ಳೆಯ ಇನ್ನಿಂಗ್ಸ್‌ಗಳಲ್ಲಿ ಪಾಕ್ ವಿರುದ್ಧದ ಆ ಇನ್ನಿಂಗ್ಸ್ ಮರೆಯಲಾರದ್ದು ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.

7/31/2020

Sanjay Manjrekar requests BCCI to take him back as commentator in IPL

MUMBAI: Former India batsman-turned commentator 

Sanjay Manjrekar

, who was removed by the 

BCCI

 from its commentary panel in March this year just before the India-South Africa ODI series which was eventually cancelled due to the outbreak of Covid-19, has requested the Board to take him back for the forthcoming edition of the 

IPL

 in UAE, which will run from September 19 to November 8.


In a short e-mail (a copy is with TOI) to the Apex Council members of the BCCI (it's his second e-mail in this regard) recently, the former Mumbai captain has assured the Board mandarins that he would "stick to the guidelines laid out" by the BCCI.

Respected members of the Apex Council, hope you all keeping well. You are already in receipt of the email I sent to explain my position as commentator. With the IPL dates announced, bcci.tv will pick its commentary panel soon. "I will be happy to work as per the guidelines laid by you. After all, we are working on what is essentially your production. Last time may be there was not enough clarity on this issue. Thanks very much, Regards," Manjrekar has written.


TOI tried to contact Manjrekar, but he wasn't available for comment.

According to sources, Manjrekar was sacked from the BCCI commentary panel after a few players in Team India complained to the Board about his controversial "bits and pieces" comment on all-rounder 

Ravindra Jadeja

 during the World Cup in England last year.

"We should close this chapter now and forgive Manjrekar. He has already apologised for his comments on Jadeja and sorted it out with the player concerned. He has promised us that he'll stick to the 'code of conduct' for TV commentators. After all, he's a fine commentator with massive cricketing knowledge," said a Board official. The final call on this issue will rest with BCCI president and former India captain 

Sourav Ganguly

 and secretary Jay Shah.

Meanwhile, batting legend 

Sunil Gavaskar

 is set to travel to the UAE for his TV commentary duties the IPL. It was being speculated that Gavaskar, now 71, may be asked by broadcaster to do "virtual commentary" from Mumbai in the light of health risks posed by Covid-19, but TOI can confirm that the opening great will go to the UAE for commentary in the T20 tournament.



7/30/2020

IPL 2020 Final: ಈ ಬಾರಿಯ ಐಪಿಎಲ್ ಫೈನಲ್ ಪಂದ್ಯದಲ್ಲಿ ಮಹತ್ವದ ಬದಲಾವಣೆ: ಏನದು ಗೊತ್ತೇ?

IPL 2020 Final: ಬಿಸಿಸಿಐ ಈ ಬಾರಿಯ ಐಪಿಎಲ್ ಫೈನಲ್ ಪಂದ್ಯದಲ್ಲಿ ಮಹತ್ವದ ಬದಲಾವಣೆ ತರಲು ಮುಂದಾಗಿದೆ. ಏನದು ಈ ಸ್ಟೋರಿ ಓದಿ.





13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆಯೋಜನೆಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳು ಬಿಡುವಿಲ್ಲದೆ ಸಿದ್ಧತೆ ನಡೆಸುತ್ತಿದೆ. ಈಗಾಗಲೇ ಕೊರೋನಾ ಸೋಂಕು ಹರಡುವಿಕೆ ವ್ಯಾಪಕವಾಗಿ ಹೆಚ್ಚಾಗುತ್ತಿರುವುದರಿಂದ ಐಪಿಎಲ್ ಅನ್ನು ಯುಎಇಗೆ ಸ್ಥಳಾಂತರಿಸಲು ಕೇಂದ್ರ ಸರ್ಕಾರದಿಂದ ಅನುಮೋದನೆ ಕೇಳುತ್ತಿದೆ.
ಅಲ್ಲದೆ ಬಿಸಿಸಿಐ ಪರಿಹಾರ ಮಾರ್ಗೋಪಾಯಗಳ ಪರಿಶೋಧನೆಯಲ್ಲಿ ತೊಡಗಿದೆ. ಇದಕ್ಕಾಗಿ ತನ್ನದೇಯಾದ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (ಎಸ್ಓಪಿ) ಅನ್ನೂ ಕೂಡ ರೂಪಿಸಿದೆ.
ಯುಎಇನಲ್ಲಿ 51 ದಿನಗಳ ಕಾಲ ರಂಗು ರಂಗಿನ ಮಿಲಿಯನ್ ಡಾಲರ್ ಟೂರ್ನಿ ಹಬ್ಬ ಆಯೋಜನೆಯಾಗಿದ್ದು, ಸೆಪ್ಟೆಂಬರ್ 19 ರಿಂದ ಟೂರ್ನಿ ಶುರುವಾಗಿ ನವೆಂಬರ್ 8ರಂದು ಫೈನಲ್ ಪಂದ್ಯ ನಡೆಯಲಿದೆ.
ಆದರೆ, ಸದ್ಯ ಬಿಸಿಸಿಐ ಐಪಿಎಲ್ ಫೈನಲ್ ಪಂದ್ಯದಲ್ಲಿ ಮಹತ್ವದ ಬದಲಾವಣೆ ತರಲು ಮುಂದಾಗಿದೆ.
ಫೈನಲ್ ಕಾದಾಟವನ್ನು ನವೆಂಬರ್ 8ರಿಂದ ನವೆಂಬರ್ 10ಕ್ಕೆ ಮುಂದೂಡುವ ಸಾಧ್ಯತೆ ಹೆಚ್ಚಾಗಿದೆ. ಟೂರ್ನಿ ಪ್ರಸಾರಕರು ಮುಖ್ಯವಾಗಿ ಸ್ಟಾರ್ ಇಂಡಿಯಾವು ದೀಪಾವಳಿ ವಾರವನ್ನು ಇನ್ನಷ್ಟು ಬಳಸಿಕೊಳ್ಳಲು ಈ ಯೋಜನೆ ಹಾಕಿಕೊಂಡಿದೆ ಎನ್ನಲಾಗಿದೆ.
ನವೆಂಬರ್​ನಲ್ಲಿ ದೀಪಾವಳಿ ಹಬ್ಬದ ಸಂಭ್ರಮವಾದ್ದರಿಂದ ಐಪಿಎಲ್ ಫೈನಲ್ ಕಾತರತೆಯನ್ನು ಇನ್ನೆರಡು ದಿನ ಮುಂದೂಡಿ ದೊಡ್ಡ ಸಂಖ್ಯೆಯ ವೀಕ್ಷಕರನ್ನು ಸೆಳೆಯಲು ಪ್ರಸಾರಕರು ಯೋಚಿಸಿದ್ದಾರೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.
ಹೀಗಾಗಿ ನ. 8ರ ಬದಲು ಐಪಿಎಲ್ ಫೈನಲ್ ಪಂದ್ಯ ನವೆಂಬರ್ 10ಕ್ಕೆ ನಡೆಯಲಿದೆಯಂತೆ. ಆದರೆ, ಐಪಿಎಲ್ ಮುಗಿದ ಬೆನ್ನಲ್ಲೇ ಟೀಂ ಇಂಡಿಯಾ ಯುಎಇಯಿಂದಲೇ ನೇರವಾಗಿ ಆಸ್ಟ್ರೇಲಿಯಾಕ್ಕೆ ಹೊರಡಲಿದ್ದಾರೆ.
ಭಾರತ ಮತ್ತು ಆಸ್ಟ್ರೇಲಿಯಾ ಸರಣಿಗೂ ಮುನ್ನ ಎರಡೂ ತಂಡಗಳಿಗೆ 14 ದಿನಗಳ ಕಡ್ಡಾಯ ಕ್ವಾರಂಟೈನ್ ವಿಧಿಸಲಾಗಿರುವುದರಿಂದ ಭಾರತ ತಂಡದ ಆಟಗಾರರು ಅಲ್ಲಿಗೆ ಮುಂಚಿತವಾಗಿ ತಲುಪಬೇಕಾಗಿದೆ.
ಇನ್ನೂ ಈ ಬಾರಿಯ ಐಪಿಎಲ್ ಪಂದ್ಯಾವಳಿ ಹೇಗಿರದೆ? ಆಟಗಾರರು ಮತ್ತು ಫ್ರ್ಯಾಂಚೈಸಿಗಳು ಹೇಗಿರಬೇಕು? ಎಂಬ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ ಅನ್ನು ಬಿಸಿಸಿಐ ರೂಪಿಸಿದೆ.
ಪ್ರಮುಖವಾಗಿ ವೀಕ್ಷಕ ವಿವರಣಾಕಾರರು 6 ಅಡಿ ಅಂತರದಲ್ಲಿ ಕುಳಿತುಕೊಳ್ಳಬೇಕು. ಡ್ರೆಸ್ಸಿಂಗ್ ರೂಂನಲ್ಲಿ ಒಂದು ಸಲಕ್ಕೆ 15 ಕ್ಕಿಂತ ಹೆಚ್ಚು ಆಟಗಾರರು ಇರುವಂತಿಲ್ಲ. ಅಲ್ಲದೆ ಪಂದ್ಯಾವಳಿ ವೇಳೆ ಎಲ್ಲಾ ಕಡೆ ಸಾಮಾಜಿಕ ಅಂತರ ಕಾಪಾಡುವುದು ಕಡ್ಡಾಯ ಎಂದು ಹೇಳಿದೆ.


7/29/2020

ಐಸಿಸಿ ಏಕದಿನ ರ‍್ಯಾಕಿಂಗ್: ಬ್ಯಾಟಿಂಗ್ ವಿಭಾಗದಲ್ಲಿ ಅಗ್ರಸ್ಥಾನಗಳನ್ನು ಕಾಯ್ದುಕೊಂಡ ಕೊಹ್ಲಿ,ರೋಹಿತ್

ನವದೆಹಲಿ: ಐಸಿಸಿ ಏಕದಿನ ರ‍್ಯಾಕಿಂಗ್ ಪಟ್ಟಿ ಪ್ರಕಟವಾಗಿದ್ದು, ಟೀಂ ಇಂಡಿಯಾ ನಾಕಯ ವಿರಾಟ್ ಕೊಹ್ಲಿ ಹಾಗೂ ಉಪ ನಾಯಕ ರೋಹಿತ್ ಶರ್ಮಾ ಕ್ರಮವಾಗಿ ನಂಬರ್1 ಹಾಗೂ ನಂಬರ್ 2 ಸ್ಥಾನಗಳನ್ನು  ಕಾಯ್ದುಕೊಂಡಿದ್ದಾರೆ.


ಮಂಗಳವಾರ ಬಿಡುಗಡೆಯಾದ ರ‍್ಯಾಕಿಂಗ್ ಪಟ್ಟಿಯಲ್ಲಿ ವೇಗಿ  ಜಸ್ಪ್ರೀತ್ ಬೂಮ್ರಾ ಬೌಲರ್ ಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಉಳಿದುಕೊಂಡಿದ್ದಾರೆ.

871 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಕೊಹ್ಲಿ ಅಗ್ರಸ್ಥಾನದಲ್ಲಿದ್ದರೆ 855 ಅಂಕಗಳೊಂದಿಗೆ ರೋಹಿತ್ ಎರಡನೇ ಸ್ಥಾನ, 829 ಅಂಕಗಳೊಂದಿಗೆ ಪಾಕಿಸ್ತಾನದ ಬಾಬರ್ ಅಜಂ ಮೂರನೇ ಸ್ಥಾನದಲ್ಲಿದ್ದಾರೆ.

ಬೌಲರ್ ವಿಭಾಗದಲ್ಲಿ 722 ಅಂಕಗಳೊಂದಿಗೆ ನ್ಯೂಜಿಲೆಂಡ್ ವೇಗಿ ಟ್ರೆಂಟ್ ಬೌಲ್ಟ್ ಅಗ್ರಸ್ಥಾನದಲ್ಲಿದ್ದರೆ, 719 ಅಂಕಗಳೊಂದಿಗೆ ಭಾರತದ ಜಸ್ಪ್ರೀತ್ ಬೂಮ್ರಾ ಎರಡನೇ ಸ್ಥಾನದಲ್ಲಿದ್ದಾರೆ. 701 ಅಂಕಗಳೊಂದಿಗೆ ಅಪ್ಘಾನಿಸ್ತಾದ ಮುಜಿಬ್ ಉರ್ ರೆಹಮಾನ್
ಮೂರನೇ ಸ್ಥಾನದಲ್ಲಿದ್ದಾರೆ.

ಟಾಪ್ 10 ಅಲ್ ರೌಂಡರ್ ಗಳ ಪಟ್ಟೆಯಲ್ಲಿ ಭಾರತದ ರವೀಂದ್ರ ಜಡೇಜಾ 8ನೇ ಸ್ಥಾನದಲ್ಲಿದ್ದಾರೆ. ಈ ವಿಭಾಗದಲ್ಲಿ ಅಪ್ಘಾನಿಸ್ತಾನದ ಮೊಹಮ್ಮದ್ ನಬಿ ಪ್ರಥಮ ಸ್ಥಾನದಲ್ಲಿದ್ದರೆ ಇಂಗ್ಲೆಂಡ್ ಆಲ್ ರೌಂಡರ್ ಬೆನ್ ಸ್ಟೋಕ್ಸ್ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.



7/28/2020

BCCI shares detailed plan for IPL 2020 in UAE

The Indian Premier League's governing council will meet on Saturday via teleconference, followed by a meeting with their primary stakeholders - franchise owners, broadcasters and central sponsors - on Sunday and Monday. The meetings will chart out the "final plan" for the tournament in UAE starting September 19. The BCCI shared its plans with TOI on Monday



1Bio-secure bubble: Each franchise will create its own bubble in which the team will only be interacting with a limited number of people in their ecosystem or allotted to them by BCCI. A similar bubble will be created for the Indian cricket board and the IMG staff, broadcasters etc. Nobody will be allowed to interact with individuals outside their bubble except through pre-appointed coordinators.

2 Revenue pools: Since all 60 IPL matches are being played in 51 days, there will be no change in the distribution of BCCI's central revenue pool.

3 Gate money: Had the IPL not happened, franchises wouldn't be looking at any income. Letting go of gate money, the board says, is "pittance".

Travel & accommodation: Franchises will have to figure their own travel arrangements and accommodation in UAE. BCCI will coordinate with UAE to ensure "discounted hotel rates" and share it with the franchises. It will be the franchise's discretion to settle for options provided by BCCI or make their own arrangements. Franchises will fly their players to UAE and back, as is the case during IPL in India.

4Medical assistance: Franchises will arrange for their own medical teams and the BCCI will arrange a central medical team. Once players & support staff land in UAE, the onus of testing will be on the franchises, who will, in turn, coordinate with BCCI's medical team on a 24x7 basis. Each franchise's medical team will stay with their respective teams within the security replacembubble.

5Playerent & loaning: There will be no change in the player policy and the franchises will be free to travel with extra players so as to avoid last-minute travels.

The board and governing council are working on details to prepare a draft on these policies that will be discussed at Saturday's meeting and then shared with the franchises. "Once we share what we do with the franchises, we know there will be questions. We need to be thoroughly prepared," said GC chairman Brijesh Patel.

ಆರ್‌ಸಿಬಿ ಈ ಬಾರಿಯ ಚಾಂಪಿಯನ್: ಬಲಿಷ್ಠ ಕಾರಣಗಳನ್ನು ಹೇಳಿದ ಆಸಿಸ್ ದಿಗ್ಗಜ

ಐಸಿಸಿ ವಿಶ್ವಕಪ್ ಟೂರ್ನಿಯನ್ನು ಮುಂದೂಡುವ ನಿರ್ಧಾರ ಪ್ರಕಟಗೊಳಿಸಿದಂತೆಯೇ ಆ ವೇದಿಕೆಯಲ್ಲಿ ಬಿಸಿಸಿಐ ಐಪಿಎಲ್ ನಡೆಸಲು ಸಜ್ಜಾಗಿದೆ. ಈಗಾಗಲೇ ಐಪಿಎಲ್ ಚೇರ್‌ಮನ್ ಬ್ರಿಜೇಶ್ ಪಟೇಲ್ ಸೆಪ್ಟೆಂಬರ್-ನವೆಂಬರ್ ಅವಧಿಯಲ್ಲಿ ಐಪಿಎಲ್ ನಡೆಯುವುದನ್ನು ಸ್ಪಷ್ಟಪಡಿಸಿದ್ದಾರೆ.


ಈ ಬೆನ್ನಲ್ಲೇ ಆರ್‌ಸಿಬಿ ಅಭಿಮಾನಿಗಳಿಗೆ ಖುಷಿ ನೀಡುವ ಹೇಳಿಕೆಯನ್ನು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ನೀಡಿದ್ದಾರೆ. ಕಳೆದ 12 ಐಪಿಎಲ್ ಆವೃತ್ತಿಯಲ್ಲಿ ನಿರಾಸೆ ಅನುಭವಿಸಿರುವ ಆರ್‌ಸಿಬಿ ತಂಡ ಈ ಬಾರಿ ಚಾಂಪಿಯನ್ ಆಗಲಿದೆ ಎಂಬ ಭವಿಷ್ಯ ನುಡಿದಿದ್ದಾರೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಬ್ರಾಡ್ ಹಾಗ್.

ಆರ್‌ಸಿಬಿ ತಂಡ ಕಾಗದದಲ್ಲಿ ಯಾವಾಗಲೂ ಬಲಿಷ್ಠವಾಗಿಯೇ ಇರುವ ತಂಡ. ಆದರೆ ಆರ್‌ಸಿಬಿಗೆ ಚಾಂಪಿಯನ್ ಆಗುವ ಅವಕಾಶ ಈವರೆಗೆ ದೊರೆತಿಲ್ಲ. ಆದರೆ ಈ ಬಾರಿ ಅದು ಚಾಂಪಿಯನ್ ಪಟ್ಟಕ್ಕೇರಲಿದೆ ಎಂದಿದ್ದಾರೆ. ಮುಂಬೈ ಇಂಡಿಯನ್ಸ್ ಚಾಂಪಿಯನ್ ಪಟ್ಟಕ್ಕೇರುವ ಸಾಧ್ಯತೆಯಿರುವ ಮತ್ತೊಂದು ತಂಡ ಎಂದಿದ್ದಾರೆ ಬ್ರಾಡ್ ಹಾಗ್.

ಆರ್‌ಸಿಬಿ ತಂಡಕ್ಕೆ ಈ ಬಾರಿ ಆರೋನ್ ಫಿಂಚ್ ಕೂಡ ಸೇರ್ಪಡೆಯಾಗುತ್ತಿದ್ದಾರೆ. ಪವರ್‌ಪ್ಲೇನಲ್ಲಿ ಅವರು ಬೌಲರ್‌ಗಳ ಮೇಲೆ ಸವಾರಿ ಮಾಡಲಿದ್ದಾರೆ. ಈ ವೇಳೆ ಸಾಕಷ್ಟು ರನ್ ಗಳಿಸಿ ಮಧ್ಯಮ ಕ್ರಮಾಂಕದ ಒತ್ತಡವನ್ನು ಕಡಿಮೆಮಾಡಲಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಅವರಂತಾ ಆಟಗಾರರು ಎದುರಾಳಿಗಳನ್ನು ದಂಡಿಸಲಿದ್ದಾರೆ ಎಂದು ಬ್ರಾಡ್ ಹಾಗ್ ಹೇಳಿದ್ದಾರೆ.

ಬೌಲಿಂಗ್ ವಿಭಾಗದಲ್ಲೂ ಆರ್‌ಸಿಬಿ ಬಲಿಷ್ಠವಾಗಿದೆ. ಡೇಲ್ ಸ್ಟೇನ್ ಹಾಗೂ ಕೇನ್ ರಿಚರ್ಡ್‌ಸನ್ ತಂ‌ಡದ ಸಮತೋಲನವನ್ನು ಈ ಹಿಂದಿನ ಟೂರ್ನಿಗಿಂತ ಹೆಚ್ಚುಗೊಳಿಸಲಿದ್ದಾರೆ. ಮಾತ್ರವಲ್ಲದೆ ಈ ಹಿಂದಿನ ಟೂರ್ನಿಯಲ್ಲಿ ಮಾಡಿದ ರಣತಂತ್ರಕ್ಕಿಂತ ಬೇರೆಯದ್ದೇ ರಣತಂತ್ರವನ್ನು ಹೆಣೆಯಲಿದ್ದಾರೆ ಎಂದು ಬ್ರಾಡ್ ಹಾಗ್ ಹೇಳಿದ್ದಾರೆ.



BCCI ಅಂಗೀಕಾರ ಪತ್ರ ಪಡೆದ UAE: IPL T20‌ ಆಯೋಜನೆಗೆ ಲಭಿಸಿತು ಅಧಿಕೃತ ಚಾಲನೆ

ಹೊಸದಿಲ್ಲಿ: ಹದಿಮೂರನೇ ಆವೃತ್ತಿಯ ಐಪಿಎಲ್‌ ಕ್ರಿಕೆಟ್‌ ಪಂದ್ಯಾವಳಿಯ ಆಯೋಜನೆಗೆ ಸಂಬಂಧಿಸಿದಂತೆ ಎಮಿರೇಟ್ಸ್‌ ಕ್ರಿಕೆಟ್‌ ಬೋರ್ಡ್‌ಗೆ (ಇಸಿಬಿ) ಬಿಸಿಸಿಐ ಅಂಗೀಕಾರ ಪತ್ರವನ್ನು ರವಾನಿಸಿದೆ.

ಇದನ್ನು ಸ್ವೀಕರಿಸಿದ್ದಾಗಿ ಇಸಿಬಿ ಹೇಳುವುದರೊಂದಿಗೆ 2020ನೇ ಸಾಲಿನ ಐಪಿಎಲ್‌ ಸಂಘಟನೆಗೆ ಅಧಿಕೃತ ಚಾಲನೆ ಲಭಿಸಿದಂತಾಗಿದೆ.

ಕೋವಿಡ್ 19 ಕಾರಣದಿಂದಾಗಿ ಭಾರತದಲ್ಲಿ ಐಪಿಎಲ್‌ ನಡೆಸುವುದು ಅಸಾಧ್ಯವಾದರೆ ಅದನ್ನು ತಾನು ಸಂಘಟಿಸುವುದಾಗಿ ಯುಎಇ ಮುಂದೆ ಬಂದಿತ್ತು.

ಆದರೆ ಇದಕ್ಕೆ ಬಿಸಿಸಿಐ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಮೂರು ದಿನಗಳ ಹಿಂದೆ ಐಪಿಎಲ್‌ ಚೇರ್ಮನ್‌ ಬೃಜೇಶ್‌ ಪಟೇಲ್‌ ಕೂಟದ ದಿನಾಂಕವನ್ನು ಪ್ರಕಟಿಸುವುದರ ಜತೆಗೆ ಇದನ್ನು ಪೂರ್ಣ ಪ್ರಮಾಣದಲ್ಲಿ ಯುಎಇಯಲ್ಲಿ ನಡೆಸಲಾಗುವುದು ಎಂದಿದ್ದರು.

ಇದನ್ನು ಯುಎಇ ಸ್ವಾಗತಿಸಿತ್ತು. ಆದರೆ ರವಿವಾರವಷ್ಟೇ ಪ್ರತಿಕ್ರಿಯಿಸಿದ ಇಸಿಬಿ ಪ್ರಧಾನ ಕಾರ್ಯದರ್ಶಿ ಮುಬಾಶಿರ್‌ ಉಸ್ಮಾನಿ, ಕೂಟಕ್ಕೆ ನಾವು ಸಜ್ಜಾಗಿದ್ದೇವೆ, ಆದರೆ ಬಿಸಿಸಿಐಯಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ ಎಂದಿದ್ದರು. ಇದೀಗ ಇತ್ಯರ್ಥಗೊಂಡಿದೆ. ಅಂಗೀಕಾರ ಪತ್ರ ರವಾನಿಸಿದ್ದಾಗಿ ಬೃಜೇಶ್‌ ಪಟೇಲ್‌ ನೀಡಿದ ಹೇಳಿಕೆಯನ್ನು ‘ಖಲೀಜ್‌ ಟೈಮ್ಸ್‌’ ವರದಿ ಮಾಡಿದೆ.

‘ನಮಗೆ ಬಿಸಿಸಿಐಯಿಂದ ಪತ್ರ ಬಂದಿದೆ. ಇನ್ನು ಭಾರತ ಸರಕಾರ ಯಾವ ತೀರ್ಮಾನ ತೆಗೆದುಕೊಳ್ಳುತ್ತದೆ ಎಂಬುದರ ಮೇಲೆ ನಾವು ಮುಂದುವರಿಯಲಿದ್ದೇವೆ’ ಎಂದು ಉಸ್ಮಾನಿ ಹೇಳಿದ್ದಾರೆ.

ಸುರಕ್ಷಿತ ಅಭ್ಯಾಸ
ಐಪಿಎಲ್‌ನಲ್ಲಿ ಭಾಗವಹಿಸಲಿರುವ ಎಲ್ಲ ತಂಡಗಳ ಆಟಗಾರರು ಜೈವಿಕ ಸುರಕ್ಷಾ ವಲಯದಲ್ಲಿ ಅಭ್ಯಾಸ ನಡೆಸಲಿದ್ದಾರೆ ಎಂದು ಬೃಜೇಶ್‌ ಪಟೇಲ್‌ ಹೇಳಿದ್ದಾರೆ. ಪಂದ್ಯಾವಳಿಗೂ ಮುನ್ನ ಆಟಗಾರರೆಲ್ಲ ಯುಎಇಯಲ್ಲಿ 3ರಿಂದ 4 ವಾರಗಳ ತನಕ ಅಭ್ಯಾಸ ಮಾಡುವರೆಂದೂ ಪಟೇಲ್‌ ತಿಳಿಸಿದರು.

ಮೂಲ ವೇಳಾಪಟ್ಟಿ ಪ್ರಕಾರ ಈ ವರ್ಷದ ಐಪಿಎಲ್‌ ಮಾ. 29ರಂದು ಮುಂಬೈ-ಚೆನ್ನೈ ಮುಖಾಮುಖಿಯೊಂದಿಗೆ ಆರಂಭವಾಗಬೇಕಿತ್ತು. ಆದರೆ ಕೋವಿಡ್ 19ನಿಂದಾಗಿ ಕೂಟ ಮುಂದೂಡಲ್ಪಟ್ಟಿತು.

ಆಸ್ಟ್ರೇಲಿಯದಲ್ಲಿ ನಡೆಯಬೇಕಿದ್ದ ವರ್ಷಾಂತ್ಯದ ಟಿ20 ವಿಶ್ವಕಪ್‌ ಮುಂದೂಡಲ್ಪಟ್ಟಿದ್ದರಿಂದ ಐಪಿಎಲ್‌ಗೆ ಕಿಂಡಿಯೊಂದು ತೆರೆಯಲ್ಪಟ್ಟಿತು. ಅದರಂತೆ 51 ದಿನಗಳ ಈ ಹಣಾಹಣಿಯನ್ನು ಸೆ. 19ರಿಂದ ನ. 8ರ ತನಕ ಯುಎಇಯಲ್ಲಿ ನಡೆಸುವುದೆಂದು ತೀರ್ಮಾನಿಸಲಾಯಿತು.

7/27/2020

IPL 2020: ಅಂದು ಯುಎಇನಲ್ಲಿ ನಡೆದ ಐಪಿಎಲ್​ನಲ್ಲಿ ಅಬ್ಬರಿಸಿದ್ದು ಕೊಹ್ಲಿ-ರೋಹಿತ್ ಅಲ್ಲ; ಮತ್ಯಾರು?

ಯುಎಇನಲ್ಲಿ ಐಪಿಎಲ್ ಟೂರ್ನಿ ನಡೆಯುತ್ತಿರುವುದು ಇದೇ ಮೊದಲ ಬಾರಿಯೇನಲ್ಲ. ಈ ಹಿಂದೆ 2014ರಲ್ಲಿ ಭಾರತದಲ್ಲಿ ಎಲೆಕ್ಷನ್ ಇದ್ದ ಕಾರಣ ಮೊದಲ 20 ಪಂದ್ಯವನ್ನು ಯುಎಇನಲ್ಲಿ ಆಯೋಜಿಸಲಾಗಿತ್ತು

ಇಂಡಿಯರ್ ಪ್ರೀಮಿಯರ್ ಲೀಗ್ ಅಭಿಮಾನಿಗಳಿಗೆ ಕೇವಲ ಕ್ರಿಕೆಟ್ ಪಂದ್ಯ ಮಾತ್ರವಲ್ಲ. ಅದೊಂದು ಹಬ್ಬವಿದ್ದಂತೆ. ಈ ಮಿಲಿಯನ್ ಡಾಲರ್ ಟೂರ್ನಿಗೆ ಈಗ ಮುಹೂರ್ತ ಕೂಡಿಬಂದಿದ್ದು ಇದೇ ವರ್ಷ ವಿದೇಶದಲ್ಲಿ ನಡೆಯಲಿದೆ.


ಸೆಪ್ಟೆಂಬರ್ 18ಕ್ಕೆ 13ನೇ ಆವೃತ್ತಿಯ ಐಪಿಎಲ್​ಗೆ ಚಾಲನೆ ಸಿಗಲಿದ್ದು, ನವೆಂಬರ್ 8 ರಂದು ಫೈನಲ್ ಪಂದ್ಯ ನಡೆಯಲಿದೆ. ಬಿಸಿಸಿಐ ವೇಳಾಪಟ್ಟಿ ಸಿದ್ದಮಾಡುತ್ತಿದ್ದು ಕೆಲವೇ ದಿನಗಳಲ್ಲಿ ಪ್ರಕಟವಾಗಲಿದೆ.

IPL 2020: ಅಂದು ಯುಎಇನಲ್ಲಿ ನಡೆದ ಐಪಿಎಲ್​ನಲ್ಲಿ ಅಬ್ಬರಿಸಿದ್ದು ಕೊಹ್ಲಿ-ರೋಹಿತ್ ಅಲ್ಲ; ಮತ್ಯಾರು?

ಯುಎಇನಲ್ಲಿ ಐಪಿಎಲ್ ಟೂರ್ನಿ ನಡೆಯುತ್ತಿರುವುದು ಇದೇ ಮೊದಲ ಬಾರಿಯೇನಲ್ಲ. ಈ ಹಿಂದೆ 2014ರಲ್ಲಿ ಭಾರತದಲ್ಲಿ ಎಲೆಕ್ಷನ್ ಇದ್ದ ಕಾರಣ ಮೊದಲ 20 ಪಂದ್ಯವನ್ನು ಯುಎಇನಲ್ಲಿ ಆಯೋಜಿಸಲಾಗಿತ್ತು.

IPL 2020: ಅಂದು ಯುಎಇನಲ್ಲಿ ನಡೆದ ಐಪಿಎಲ್​ನಲ್ಲಿ ಅಬ್ಬರಿಸಿದ್ದು ಕೊಹ್ಲಿ-ರೋಹಿತ್ ಅಲ್ಲ; ಮತ್ಯಾರು?

    ಇಂಡಿಯರ್ ಪ್ರೀಮಿಯರ್ ಲೀಗ್ ಅಭಿಮಾನಿಗಳಿಗೆ ಕೇವಲ ಕ್ರಿಕೆಟ್ ಪಂದ್ಯ ಮಾತ್ರವಲ್ಲ. ಅದೊಂದು ಹಬ್ಬವಿದ್ದಂತೆ. ಈ ಮಿಲಿಯನ್ ಡಾಲರ್ ಟೂರ್ನಿಗೆ ಈಗ ಮುಹೂರ್ತ ಕೂಡಿಬಂದಿದ್ದು ಇದೇ ವರ್ಷ ವಿದೇಶದಲ್ಲಿ ನಡೆಯಲಿದೆ.


    ಸೆಪ್ಟೆಂಬರ್ 18ಕ್ಕೆ 13ನೇ ಆವೃತ್ತಿಯ ಐಪಿಎಲ್​ಗೆ ಚಾಲನೆ ಸಿಗಲಿದ್ದು, ನವೆಂಬರ್ 8 ರಂದು ಫೈನಲ್ ಪಂದ್ಯ ನಡೆಯಲಿದೆ. ಬಿಸಿಸಿಐ ವೇಳಾಪಟ್ಟಿ ಸಿದ್ದಮಾಡುತ್ತಿದ್ದು ಕೆಲವೇ ದಿನಗಳಲ್ಲಿ ಪ್ರಕಟವಾಗಲಿದೆ.


    ಯುಎಇನಲ್ಲಿ ಐಪಿಎಲ್ ಟೂರ್ನಿ ನಡೆಯುತ್ತಿರುವುದು ಇದೇ ಮೊದಲ ಬಾರಿಯೇನಲ್ಲ. ಈ ಹಿಂದೆ 2014ರಲ್ಲಿ ಭಾರತದಲ್ಲಿ ಎಲೆಕ್ಷನ್ ಇದ್ದ ಕಾರಣ ಮೊದಲ 20 ಪಂದ್ಯವನ್ನು ಯುಎಇನಲ್ಲಿ ಆಯೋಜಿಸಲಾಗಿತ್ತು.


    ಆದರೆ, ಈ ಬಾರಿ ಸಂಪೂರ್ಣ ಐಪಿಎಲ್ ಟೂರ್ನಿ ಯುಎಇನಲ್ಲೇ ನಡೆಯಲಿದೆ. ಹಾಗಾದ್ರೆ ಕಳೆದ ಬಾರಿ ಯುಎಇನಲ್ಲಿ ಐಪಿಎಲ್ ನಡೆದಾಗ ಯಾವ ಬ್ಯಾಟ್ಸ್​ಮನ್​ ಅಬ್ಬರಿಸಿದ್ದರು? ಈ ಕುರಿತ ಮಾಹಿತಿ ಇಲ್ಲಿವೆ.
    ಮನೀಶ್ ಪಾಂಡೆ: 2014 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಕಣಕ್ಕಿಳಿದ ಮನೀಶ್ ಪಾಂಡೆ ಅಮೋಘ ಪ್ರದರ್ಶನ ನೀಡಿದ್ದರು.


    ಯುಎಇನಲ್ಲಿ ನಡೆದ 5 ಪಂದ್ಯಗಳಲ್ಲಿ ಪಾಂಡೆ 144 ರನ್ ಬಾರಿಸಿದ್ದರು. ಅದರಲ್ಲೂ ಮುಂಬೈ ಇಂಡಿಯನ್ಸ್ ವಿರುದ್ಧ ಚೊಚ್ಚಲ ಪಂದ್ಯದಲ್ಲೇ 64 ರನ್ ಸಿಡಿಸಿ ಪಂದ್ಯ ಗೆಲ್ಲಿಸಿಕೊಟ್ಟಿದ್ದರು.

    ಡೇವಿಡ್ ವಾರ್ನರ್: ಸನ್ರೈಸರ್ಸ್ ಹೈದರಾಬಾದ್ ತಂಡದ ಪರ ಐಪಿಎಲ್ ಅಭಿಯಾನ ಆರಂಭಿಸಿದ ಡೇವಿಡ್ ವಾರ್ನರ್ ತನ್ನ ಚೊಚ್ಚಲ ಸೀಸನ್​ನಲ್ಲೇ ಅಪಾಯಕಾರಿಯಾಗಿ ಗೋಚರಿಸಿದರು.


    ಯುಎಇನಲ್ಲಿ ನಡೆದ ಮೊದಲ 5 ಪಂದ್ಯಗಳಲ್ಲೇ ವಾರ್ನರ್ 163 ರನ್ ಕಲೆಹಾಕಿದರು. 112 ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟ್ ಬೀಸಿದ್ದರು ಎಂಬುದು ಮತ್ತೊಂದು ವಿಶೇಷ.


    ಆ್ಯರೋನ್ ಫಿಂಚ್: 2014 ರಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ಪರ ಆಡಿದ್ದ ಆಸೀಸ್ ಆಟಗಾರ ಆ್ಯರೋನ್ ಫಿಂಚ್ ಉತ್ತಮವಾಗಿ ಬ್ಯಾಟ್ ಬೀಸಿದ್ದರು.


    ಆಡಿದ 5 ಪಂದ್ಯಗಳಲ್ಲಿ ಫಿಂಚ್ ಅವರು 127 ಸ್ಟ್ರೈಕ್​ರೇಟ್​ನಲ್ಲಿ 169 ರನ್ ಕಲೆಹಾಕಿದ್ದರು. ಈ ಬಾರಿ ಆರ್​ಸಿಬಿ ಪರ ಕಣಕ್ಕಿಳಿಯಲಿರುವ ಫಿಂಚ್ ಮೇಲೆ ಸಾಕಷ್ಟು ನಿರೀಕ್ಷೆ ಇಡಲಾಗಿದೆ.


    ಅಜಿಂಕ್ಯಾ ರಹಾನೆ: ಪ್ರತಿಭಾನ್ವಿತ ಬ್ಯಾಟ್ಸ್​ಮನ್​ ಅಜಿಂಕ್ಯ ರಹಾನೆ 2104ರಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಪ್ರಮುಖ ಆಟಗಾರನಾಗಿದ್ದರು. ಯುಎಇನಲ್ಲಿ ನಡೆದ ಮೊದಲ 5 ಪಂದ್ಯದಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ರಹಾನೆ ಮೊದಲ ಎರಡು ಪಂದ್ಯಗಳಲ್ಲೇ ಅರ್ಧಶತಕ ಸಿಡಿಸಿದ್ದರು.


    ಆಡಿದ ಒಟ್ಟು 5 ಪಂದ್ಯಗಳಲ್ಲಿ ರಹಾನೆ 182 ರನ್ ಕಲೆಹಾಕಿ ಗರಿಷ್ಠ ರನ್ ಕಲೆಹಾಕಿದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.


    ಗ್ಲೆನ್ ಮ್ಯಾಕ್ಸ್​ವೆಲ್​: 2104 ರಲ್ಲಿ ಯುಎಇನಲ್ಲಿ ನಡೆದ ಮೊದಲ 5 ಪಂದ್ಯದಲ್ಲಿ ಆರ್ಭಟಿಸಿದ್ದು ಆಸೀಸ್ ಸ್ಫೋಟಕ ಬ್ಯಾಟ್ಸ್​ಮನ್​ ಗ್ಲೆನ್ ಮ್ಯಾಕ್ಸ್​ವೆಲ್.


    ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರ ಕಣಕ್ಕಿಳಿದ ಮ್ಯಾಕ್ಸ್​ವೆಲ್​ ಕೇವಲ 5 ಇನ್ನಿಂಗ್ಸ್​ನಲ್ಲಿ 201 ಸ್ಟ್ರೈಕ್​ರೇಟ್​ ಮೂಲಕ 300 ರನ್ ಚಚ್ಚಿದ್ದರು.

    Published by: Vinay Bhat
    First published: July 27, 2020, 12:49 PM IST


    ಸಂಜು ಪ್ರತಿಭೆಯನ್ನು ಧೋನಿಗೆ ಹೋಲಿಸಿದ ಶಶಿ ತರೂರ್: ಗಂಭೀರ್ ಬಳಿಕ ಶ್ರೀಶಾಂತ್ ಆಕ್ಷೇಪ

     ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಸತತ ಎರಡು ಇನ್ನಿಂಗ್ಸ್‌ಗಳಲ್ಲಿ ಶ್ರೇಷ್ಠ ಪ್ರದರ್ಶನವನ್ನು ನೀಡಿ ಮಿಂಚಿರುವ ಸಂಜು ಸ್ಯಾಮ್ಸನ್ ಪ್ರತಿಭೆಗೆ ಪ್ರಶಂಸೆಯ ಸುರಿಮಳೆಯೇ ಬಂದಿದ...